Vývojář: Vishaya Kannada (59)
Cena: * Zdarma
Hodnocení: 0 
Recenze: 0 Napsat recenzi
Seznamy: 0 + 0
Body: 0 + 0 ¡
Google Play

Popis

Gopala dasa kannada keerthane
ಗೋಪಾಲ (ಭಾಗಣ್ಣ) ದಾಸರ ಕೀರ್ತನೆ ಸಂಗ್ರಹ
ಗೋಪಾಲದಾಸರು - ಕನ್ನಡ ನಾಡಿನ ಹರಿದಾಸರಲ್ಲಿ ಅಗ್ರಗಣ್ಯರು.
ವಿಜಯ ದಾಸರ ಶಿಷ್ಯರು ಮತ್ತು ಭಕ್ತಿಯಲ್ಲಿ ಭಾಗಣ್ಣ ಎಂಬ ಸ್ತುತಿಗೆ ಪಾತ್ರರಾದವರು ಗೋಪಾಲದಾಸರು.
ಶ್ರೀ ರಾಘವೇಂದ್ರಸ್ವಾಮಿಗಳ ಪ್ರೇರಣೆಯಿಂದ ಶ್ರೀ ವಿಜಯದಾಸರು, ಶ್ರೀ ಗೋಪಾಲದಾಸರು, ಶ್ರೀ ಜಗನ್ನಾಥದಾಸರು ಮುಂತಾದವರು ದಾಸ ಸಾಹಿತ್ಯದ ಮರುಹುಟ್ಟಿಗೆ ಕಾರಣರಾದರು.
ಪುರಂದರ ದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರುಗಳನ್ನು ಒಟ್ಟಿಗೆ ದಾಸ ಚತುಷ್ಟಯರೆಂದು ಕರೆಯುತ್ತಾರೆ.
ಹೀಗೆ ರಾಯರ ಪ್ರಭಾವದಿಂದ ಪ್ರಸಿದ್ಧಿ ಪಡೆದ ವಿಜಯದಾಸರ ಪ್ರಮುಖ ಶಿಷ್ಯರು ಶ್ರೀ ಗೋಪಾಲದಾಸರು.
ಇವರ ತಂದೆ ತಾಯಿ ಇವರಿಗೆ ಇಟ್ಟ ಹೆಸರೆಂದರೆ ಭಾಗಣ್ಣ.
ಭಾಗಣ್ಣ ಗಾಯತ್ರಿ ಮಂತ್ರ ಸಾಧನೆ ಮಾಡಿ ಜನರಿಗೆ ಭವಿಷ್ಯ ಹೇಳಿ ತನ್ನ ಜೀವನ ಸಾಗಿಸುತ್ತಿದ್ದರು .
ಆ ಕಾಲದಲ್ಲಿ ಅವರು ವೆಂಕಟಕೃಷ್ಣ ಎಂಬ ಅಂಕಿತದಿಂದ ಪದಗಳನ್ನು ರಚಿಸಿ ಹಾಡುತ್ತಿದ್ದರು.
ಆಗ ವೆಂಕಟೇಶನ ಭಕ್ತರೂ ಹಾಗೂ ಪುರಂದರದಾಸರ ಶಿಷ್ಯರೂ ಆದ ವಿಜಯದಾಸರು ಭಾಗಣ್ಣನನ್ನು ಭೇಟಿಯಾದರು.
ಅವರಿಂದ ‘ಗೋಪಾಲವಿಠಲ’ ಎಂಬ ಅಂಕಿತವನ್ನು ಪಡೆದು ಭಾಗಣ್ಣ ಅಂದಿನಿಂದ ಗೋಪಾಲದಾಸರೆಂಬ ಹೆಸರಿಗೆ ಪಾತ್ರರಾದರು.
ಪುಷ್ಯ ಬಹುಳ ಅಷ್ಟಮಿ ಉತ್ತನೂರಿನ ಶ್ರೀ ಗೋಪಾಲದಾಸರ ಆರಾಧನ.
(ಕಾಲ ೧೭೨೨ - ೧೭೬೨) ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರಕಲ್ಲು ಎಂಬ ಗ್ರಾಮದಲ್ಲಿ ಜನಿಸಿದ ಗೋಪಾಲದಾಸರು,
ಇವರು ಉತ್ತನೂರಿನಲ್ಲಿ ಪುಷ್ಯ ಬಹುಳ ಸಪ್ತಮಿಯಂದು ತಮ್ಮ ಕೊನೆಯುಸಿರೆಳೆದರು.
ಉತ್ತನೂರು ಗೋಪಾಲದಾಸರ ಬೃಂದಾವನ ಇರುವ ಸ್ಥಳ.
ತಮ್ಮ ಜೀವನಕ್ಕಾಗಿ ಬಹಳ ಬಡತನದಲ್ಲೇ ಕಾಲ ಕಳೆಯುತ್ತಿದ್ದರು.
ಈತ ಹುಟ್ಟಿದ ಕೆಲವು ವರ್ಷಗಳಲ್ಲಿ ತಂದೆ ಮುರಾರಿರಾಯ ಕಾಲವಾದುದರಿಂದ
ಈತನ ತಾಯಿ ವೆಂಕಮ್ಮ ತನ್ನ ನಾಲ್ವರು ಗಂಡುಮಕ್ಕಳೊಂದಿಗೆ ದಿಕ್ಕಿಲ್ಲದೆ ಸಂಕಾಪುರಕ್ಕೆ ಬಂದು
ಅಲ್ಲಿನ ಊರ ಹೊರಗಿದ್ದ ಮಾರುತಿ ದೇವಾಲಯದಲ್ಲಿ ಆಶ್ರಯ ಪಡೆದಳು.
ಗೋಪಾಲದಾಸರು ಗಾಯತ್ರೀ ಮಂತ್ರ ಧ್ಯಾನದಿಂದ ಅಪೂರ್ವ ಸಿದ್ಧಿಯನ್ನು ಪಡೆದು ಭವಿಷ್ಯ ಹೇಳುವುದರಲ್ಲಿ ನಿಷ್ಣಾತನಾದರು.
ಜ್ಯೋತಿಷ್ಯವನ್ನು ಬಹಳ ಚೆನ್ನಾಗಿ ತಿಳಿದಿದ್ದ ಇವರ ಶಕ್ತಿ ಎಷ್ಟಿತ್ತೆಂದರೆ ಯಾರದೇ ಜ್ಯೋತಿಷ್ಯವನ್ನು ಅವರ ಹಿಂದಿನ ಮೂರು ಜನ್ಮದ ವೃತ್ತಾಂತವನ್ನು ಹೇಳುವಷ್ಟು ಸಾಮರ್ಥ್ಯವಿತ್ತು.
ಮಗನ ಈ ಏಳಿಗೆಯಿಂದ ವೆಂಕಮ್ಮನ ಕಷ್ಟಗಳು ಕ್ರಮಕ್ರಮವಾಗಿ ಕಡಿಮೆಯಾಯಿತಾಗಿ ಆಕೆ ಮಕ್ಕಳೊಂದಿಗೆ ಊರ ಹೊರಗಿನ ಮಾರುತಿ ದೇವಾಲಯದಿಂದ, ಉತ್ತನೂರಿಗೆ ಬಂದು ನೆಲೆಸಿದಳು.
ಅಲ್ಲಿನ ವೆಂಕಟೇಶನ ಗುಡಿಯೆ ಗೋಪಾಲದಾಸರ ಕಾರ್ಯಕ್ಷೇತ್ರವಾಯಿತು.
ಶ್ರೀ ಶ್ರೀನಿವಾಸಾಚಾರ್ಯರಿಗೆ (ಜಗನ್ನಾಥದಾಸರಿಗೆ), ಅವರ ಜೀವಿತದ ೪೦ ವರ್ಷಗಳ ಆಯಸ್ಸನ್ನು ಶ್ರೀ ವಿಜಯರಾಯರ ಅಪ್ಪಣೆಯಂತೆ ದಾನವಾಗಿ ನೀಡಿದ ಮಹಾನುಭಾವರು ಶ್ರೀ ಗೋಪಾಲದಾಸರು.
ಒಮ್ಮೆ ಇವರು ತಮ್ಮ ಶಿಷ್ಯರಿಗೆ ಮಧ್ಯರಾತ್ರಿ ತಮ್ಮ ತಪೋಬಲಪ್ರಭಾವದಿಂದ ಸೂರ್ಯನನ್ನು ದರ್ಶನ ಮಾಡಿಸಿದ್ದರು.
ಗೋಪಾಲದಾಸರು ತನ್ನ ತಮ್ಮಂದಿರೊಂದಿಗೆ ಕೂಡಿ ಆಶುಕವಿತೆಯಲ್ಲಿ ಜಯಪ್ರದನಾಗಿ ಉತ್ತರಾದಿ ಮಠದ ಶ್ರೀಗಳವರಾದ ಸತ್ಯಭೋಧತೀರ್ಥರ ಅನುಗ್ರಹವನ್ನು ಸಂಪಾದಿಸಿದ ಘಟನೆ ಉಲ್ಲೇಖನಾರ್ಹವಾದುದು.
ಐಜಿ ವೆಂಕಟರಾಮಾಚಾರ್ಯ ಮತ್ತು ಹೆಳವನಕಟ್ಟೆ ಗಿರಿಯಮ್ಮ ಮೊದಲಾದವರು ಗೋಪಾಲದಾಸರ ಶಿಷ್ಯವರ್ಗಕ್ಕೆ ಸೇರಿದವರಲ್ಲಿ ಪ್ರಮುಖರು.
ಗೋಪಾಲದಾಸರು ಕೀರ್ತನಕಾರನಾಗಿದ್ದದ್ದಂತೆಯೇ ಕುಶಲಿಯಾದ ಚಿತ್ರಕಾರರು ಆಗಿದ್ದರು.
ಗೋಪಾಲದಾಸರ ಲಭ್ಯ ಸಾಹಿತ್ಯ : ೯೬ ಕೀರ್ತನೆಗಳು,೨೧ ಉಗಾಭೋಗಗಳು,೭೦ ಸುಳಾದಿಗಳು.

ಗೋಪಾಲದಾಸರ ಕೀರ್ತನ whatsapp status ಗೆ ಅಥವಾ facebok story ಗೆ ಅಥವಾ ಸ್ನೇಹಿತರಿಗೆ ಅಥವಾ email ಮೂಲಕ share ಮಾಡುವ ಅವಕಾಶವನ್ನು ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ.
ಯಾವುದೇ ಸಮಸ್ಯೆಗೆ https://vishaya.in website ಮೂಲಕ ಹಾಗೂ vishaya.in@gmail.com ಮೂಲಕ ಸಂಪರ್ಕಿಸಿ.

For any issues/concerns/feedback please reach out to us vishaya.in@gmail.com OR through contact form in https://vishaya.in
Víc ↓

Snímky obrazovky

#1. Gopala dasa kannada keerthane (Android) Podle: Vishaya Kannada
#2. Gopala dasa kannada keerthane (Android) Podle: Vishaya Kannada
#3. Gopala dasa kannada keerthane (Android) Podle: Vishaya Kannada
#4. Gopala dasa kannada keerthane (Android) Podle: Vishaya Kannada
#5. Gopala dasa kannada keerthane (Android) Podle: Vishaya Kannada
#6. Gopala dasa kannada keerthane (Android) Podle: Vishaya Kannada
#7. Gopala dasa kannada keerthane (Android) Podle: Vishaya Kannada

Video

Novinky

  • Verze: 7.0
  • Aktualizováno:
  • ಗೋಪಾಲ ದಾಸರ ಅಥವಾ ಭಾಗಣ್ಣ ದಾಸರ ಕೀರ್ತನೆ , ಸುಳಾದಿ ಹಾಗು ಉಗಾಭೋಗ ಗಳ ಸಂಪೂರ್ಣ ಸಂಗ್ರಹ
    * Gopala dasa OR Bhaganna Dasa created Keerthane , Ugabhoga, Suladi complete list of collections.

Cena

Sledovat ceny

Vývojář

Body

0 ☹️

Hodnocení

0 ☹️

Seznamy

0 ☹️

Recenze

Buďte první, kdo bude hodnotit 🌟

Další informace

Kontakty

Gopala dasa kannada keerthaneGopala dasa kannada keerthane Krátká adresa URL: Zkopírováno!

Mohlo by se Vám také líbit

    • ಕನಕದಾಸ ಕೀರ್ತನೆ kanakadasa
    • Android Aplikace: Knihovny a ukázky  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 15.0   ಕನಕದಾಸರ ಕನ್ನಡ ಕೀರ್ತನೆಗಳು ಸಂಪೂರ್ಣ ಸಂಗ್ರಹ - Kanakadasa Keerthane Kannada songs Lyrics. ಕನಕದಾಸರ ಕೀರ್ತನೆ ಪದಗಳ ಸಂಗ್ರಹದ ಅಪ್ಲಿಕೇಶನ್ ಇದಾಗಿದ್ದು ಇಲ್ಲಿ ಸಾಧ್ಯವಾದಷ್ಟು ಸಂಪೂರ್ಣ ಕನಕದಾಸರ ಕೀರ್ತನೆ ಪದ ...
        ⥯ 
    • ಶಿವಶರಣೆ ಅಕ್ಕಮ್ಮನ ವಚನಗಳು
    • Android Aplikace: Knihovny a ukázky  Podle: Vishaya Kannada
    • * Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 4.0   Akkamma Complete Vachana Collection - ಅಕ್ಕಮ್ಮನ ಸಂಪೂರ್ಣ ವಚನ ಸಂಗ್ರಹ. ಶಿವಶರಣೆ ಅಕ್ಕಮ್ಮನ ವಚನಗಳು. 'ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ' ಅಂಕಿತನಾಮ ದಲ್ಲಿ ೧೫೪ ವಚನಗಳನ್ನು ರಚಿಸಿದ್ದಾಳೆ. ಜನ್ಮ ಸ್ಥಳ ಏಲೇಶ್ವರ ...
        ⥯ 
    • The Swan Books On Wheels
    • Android Aplikace: Knihovny a ukázky  Podle: AutoLib Software
    • Zdarma  
    • Seznamy: 0 + 0  Hodnocení: 0  Recenze: 0
    • Body: 0 + 0  Verze: 1.0   Swan Book on Wheels, a novel initiative, provides library services at the doorstep of readers through their mobile vans. This is the brain child of a long-serving academician and a ...
        ⥯ 

Mohlo by se Vám také líbit

Download
Vyhledávací operátory, které můžete použít v AppAggu
Přidat do AppAgg
AppAgg
Začněte – je to zdarma.
Registrace
Přihlásit se